Thursday, July 30, 2020

ಅಸೈನ್ ಮೆಂಟ್ -9, ವಕ್೯ಫ್ರಮ್ ಹೋಮ್ ನಿಂದ ವೃತ್ತಿ ನೈಪುಣ್ಯತೆ




ASSIGNMENT-8 QUIZ BANK


ASSIGNMENT-7 BRIDGE COURSE MODEL


ASSIGNMENT-2 UNIY PLAN MODELS


ಅಸೈನ್ ಮೆಂಟ್ -1,ಆಡಿಯೋ ವೀಡೀಯೋ ತಯಾರಿಕೆ


ಅಸೈನ್ ಮೆಂಟ್-3,ವಿದ್ಯಾರ್ಥಿ ಪೋಷಕರ ಸಂಪರ್ಕ ಮಾಹಿತಿ



ಅಸೈನ್ ಮೆಂಟ್ -2, ಘಟಕ ಯೋಜನೆ


ಅಸೈನ್ ಮೆಂಟ್ -5 ವೀಡಿಯೋ ಬಗ್ಗೆ ಟಿಪ್ಪಣೆ



ಅಸೈನ್ ಮೆಂಟ್ -4,ಕಲಿಕೋಪಕರಣ ತಯಾರಿಕೆ ಮಾಹಿತಿ


ಅಸೈನ್ ಮೆಂಟ್-8, ರಸಪ್ರಶ್ನೆ


ಅಸೈನ್ ಮೆಂಟ್ -7 ಸೇತುಬಂಧ ಯೋಜನೆ


Wednesday, July 29, 2020

ASSIGNMENT-10,.

       ಕೋವಿಡ-19 ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ  ತೊಡಗುವ0ತೆ ಮಾಡಲು ಸಲಹೆ ಮತ್ತು ಕಾರ್ಯತ0ತ್ರಗಳ ಪಟ್ಟಿ 

          ಜಗತ್ತು ನಾಗಾಲೋಟದಲ್ಲಿ ಓಡುತ್ತಿರುವಾಗ ಪ್ರಕೃತಿ/ ಮಾನವರ ವಿಪರೀತ ಚಟುವಟಿಕೆಗಳು ನಮಗೆ ಪಾಠ ಕಲಿಸುತ್ತವೆ. ಇದೆ ಕರೋನಾ ತಂದೊಡ್ಡಿರುವ ಆತಂಕವಾಗಿದ್ದು ಜಗತ್ತು ನರಳಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೋಗವನ್ನು ಹತೋಟಿ ತರಲು ಹರಸಾಹಸ ಪಡುತ್ತಿದೆ. ಆದ್ದರಿಂದ ಶಿಕ್ಷಕರಿಗೆ ಮನೆಯಲ್ಲಿಯೇ ಕೆಲಸ ಮಾಡಲು ತಿಳಿಸಿದೆ.

                ಸರಕಾರವು ಲಾಕ್ ಡೌನ್, ಸೀಲ್ ಡೌನ್, ಕ್ವಾರೆಂಟನ್ ಎಂಬ ಕ್ರಮಗಳ ಮೂಲಕ ಕೋವಿಡ್-19 ಹರಡುವಿಕೆಯ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಿದರೂ ಕೂಡ ಸೋಂಕು ಹೆಚ್ಚಾಗುತ್ತದೆ. ಇದಕ್ಕಾಗಿ ಆರ್ಥಿಕ ವಲಯ ಹಳಿ ತಪ್ಪಿ ಹೋಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ತುಂಬಾ ತೊಂದರೆಯಾಗಿದೆ ಇದರಲ್ಲಿ ಶಿಕ್ಷಣವೂ ದೇಶದ ಉನ್ನತಿಯಲ್ಲಿ ಪ್ರಮುಖವಾದರೂ ಪ್ರಸ್ತುತ ಅದು ಸಹ ಸ್ಥಬ್ಧವಾಗಿದೆ. ಮಕ್ಕಳ ಬಾವಿ ಭವಿಷ್ಯವನ್ನು ರೂಪಿಸ ಬೇಕಾಗಿದ್ದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕರಾದ ನಾವೆಲ್ಲರೂ ಮಕ್ಕಳ ಕಲಿಕೆಯನ್ನು ಹೇಗೆ ಉತ್ಕøಷ್ಟಗೊಳಿಸ ಬೇಕು ಎಂದು ಶಿಕ್ಷಕರಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚನೆ ನೀಡಿರುವುದರಿಂದ ಕೋವಿಡ್-19 ಹರಡುವಿಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು  ಸೂಚನೆಗಳನ್ನು ನೀಡುತ್ತಿದ್ದೇನೆ.
   
ಸಲಹೆ-ಸೂಚನೆ:-
   
   *ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವೈರಸ್ ಕುರಿತು ಮಾಹಿತಿ ನೀಡುವುದು.
   * ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಾಮಾಜಿಕ ಅಂತರ ಕಾಪಾಡಲು ತಿಳಿಸುವುದು.
   * ಮನೆಯಿಂದ ಹೊರಗಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್  ಬಳಸಲು ಸೂಚಿಸುವುದು. &ಸ್ಯಾನಿಟೇಜರ್ ಬಳಸಲು                ತಿಳಿಸುವುದು.
ಸತತವಾಗಿ ಕೈ ತೊಳೆಯಲು ತಿಳಿಸುವುದು.
ಬಿಸಿ ನೀರು, ಬಿಸಿ ಆಹಾರ ತಿನ್ನುವುದು, ಕಷಾಯ ಕುಡಿಯಲು ತಿಳಿಸುವುದು.
ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಿ ಮನೆಗೆಲಸ ನೀಡುವುದು.
ತರಗತಿವಾರು ಮನೆಗೆಲಸದ ವೇಳಾಪಟ್ಟಿಯನ್ನು ತಯಾರಿಸಿ ಮನೆಯಲ್ಲಿಯೇ ಓದಲು ಪ್ರೇರೇಪಿಸುವುದು.
ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಕಥೆ ಪುಸ್ತಕ ಸಂಗ್ರಹಿಸಲು ಹೇಳುವುದು.
ಪಠ್ಯದಲ್ಲಿ ಬರುವ ಸೂತ್ರಗಳನ್ನು ಕಂಠಪಾಠ ಮಾಡಲು ತಿಳಿಸುವುದು.
ದೂರವಾಣಿ ಮೂಲಕ ವಿದ್ಯಾರ್ಥಿಗಳಿಗೆ & ಪಾಲಕರಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ನಡೆಸುವುದು.
ಯೂಟೂಬ್ & ದೀಕ್ಷಾ ಯ್ಯಾಪ್ ಮೂಲಕ ಪಠ್ಯದ ವಿಷಯ ನೋಡಿ ಕೇಳಲು ತಿಳಿಸುವುದು
ಆಗಾಗ ಸಾಬೂನಿನಿಂದ ಕೈ ತೊಳೆಯಲು ತಿಲಿಸುವುದು.
ಉಪ್ಪು ಮಿಶ್ರಿತ ನೀರನ್ನು ಗಾರ್ಗಲ್ ಮಾಡಲು ತಿಳಿಸುವುದು.
ಮಾಧ್ಯಮದ ಮೂಲಕ ಸರಕಾರ ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಲು ತಿಳಿಸುವುದು.
ಮನೆಯಿಂದ ಹೊರ ಹೋಗದಂತೆ ಇರುವುದು.
ಮ್ಯಾಪ್ ಬಿಡಿಸಲು ತಿಳಿಸುವುದು.
ಎಲ್ಲಾ ವಿದ್ಯಾರ್ಥಿಗಳು ವಂಶವೃಕ್ಷವನ್ನು ರಚಿಸಿ ಪಾಲಕರ ಸಹಿ ಪಡೆಯಲು ತಿಳಿಸುವುದು.
ದಿನಾಲೂ ಕಾಪಿ ಪುಸ್ತಕವನ್ನು ಬರೆಯಲು ತಿಳಿಸುವುದು.
ಇತಿಹಾಸದ ಇಸ್ವಿಗಳ ಮಹತ್ವ ಬರೆಯಲು ತಿಳಿಸುವುದು.
ಕವಿ ಕೃತಿ ಪರಿಚಯ ಬರೆಯಲು ತಿಳಿಸುವುದು.
ದೂರದರ್ಶನದಲ್ಲಿ ಬರುವ ಥಟ್ ಅಂತ ಹೇಳಿ, ಮಹಾಭಾರತ, ರಾಮಾಯಣ, ಮಕ್ಕಳ ವಾಣಿ ಕಾರ್ಯಕ್ರಮ ನೋಡಲು               ತಿಳಿಸುವುದು.

              ಹೀಗೆ ಮಕ್ಕಳಿಗೆ ಕಲಿಕೆಯನ್ನು ಉತ್ಕøಷ್ಟತೆಗೊಳಿಸಲು ಅನೇಕ ಕಾರ್ಯ ಯೋಜನೆಗಳನ್ನು ಶಿಕ್ಷಕರು ಕೈಗೊಂಡು     ಮಕ್ಕಳ ಕಲಿಕೆಯ ಸಾಧನೆಯನ್ನು ಉತ್ತಮ ಪಡಿಸಲು ಇವು ಸಹಾಯಕವಾಗಿವೆ.


ASSIGNMENT-9,

 ಸದರಿ ಮನೆಯಿ0 ಕೆಲಸದಡಿಯಲ್ಲಿ ನಮ್ಮ ವೃತ್ತಿನೈಪುಣ್ಯತೆ ಹೆಚ್ಚಿಸಿಕೊ0 ಕುರಿತ ಬರಹ                                                             (400 ಪದಗಳು)

           ಕಲಿಕೆ ಎನ್ನುವುದು ನಿಂತ ನೀರಲ್ಲ. ಅದು ಹರಿಯುವ ನೀರಿದ್ದಂತೆ. ಹಾಗೆಯೇ ವಿದ್ಯೆ ಎಂಬುದು

 ಎಂದಿಗೂ ಮುಗಿಯದ ಅಧ್ಯಾಯ, ಅದೊಂದು ನಿರಂತರ ಪ್ರಕ್ರಿಯೆ ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು  ಸಾರುತ್ತದೆ. ಶಿಕ್ಷಕ ಯಾವಾಗಲೂ  ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ, ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿಒಬ್ಬ ಉತ್ತಮ ಶಿಕ್ಷಕ ಯಾವಾಗಲೂ  ವಿದ್ಯಾರ್ಥಿಯಾಗಿರುತ್ತಾನೆಎಂಬ ಮಾತನ್ನು ಕೇಳಿದ್ದೇವೆ.

                ಸಂಬಂಧ ಯುನೆಸ್ಕೋದ ಮಾಜಿ ನಿರ್ದೇಶಕರಾದ ಐರಿನ್ ಬೊಕೊವಾರ್ ಅವರುಗುಣಾತ್ಮಾಕ ಶಿಕ್ಷಣಕ್ಕೆ ಸಂಬಂಧಿಸಿದಂತೆ  ಶಿಕ್ಷಕರಿಗಿರುವ ವೃತ್ತಿಯ ನೈಪುಣ್ಯತೆಯ ಜ್ಞಾನ ಮತ್ತು ಕೌಶಲ್ಯ ಅತ್ಯಂತ ಮಹತ್ವದ್ದಾಗಿದೆಎಂದಿದ್ದಾರೆ. ಮೇಲಿನ ಮಾತು ಅಕ್ಷರಶ: ಸತ್ಯ. ಒಂದು ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಅಲ್ಲಿನ ಗುಣಮಟ್ಟಕ್ಕಿಂತಲೂ ಹೆಚ್ಚಿರಲಾರದು. ಶಿಕ್ಷಕರ ಸೇವಾಪೂರ್ವ & ಸೇವಾ ನಿರತ ಶಿಕ್ಷಣ ತರಬೇತಿ ಮತ್ತು ಕೆಲಸ ನಿರ್ವಹಣೆಯ ಪರಿಸ್ಥಿತಿಯ & ವಸ್ತುಸ್ಥಿತಿ ಇತ್ಯಾದಿ. ವಿಷಯಗಳು ಶಿಕ್ಷಣಗಳು ಒಟ್ಟು ಗುಣಾತ್ಮಕತೆಯ ಮೇಲೆ ಪ್ರಭಾವ ಬೀರುವ  ಮಹತ್ವದ ಅಂಶಗಳಾಗಿರುತ್ತವೆ.

                  ಯಾವುದೇ  ದೇಶದಲ್ಲಿ ಶಿಕ್ಷಕರಿಗೆ ನೀಡುವ ಶೈಕ್ಷಣಿಕ ಸವಲತ್ತುಗಳನ್ನು & ಅವರನ್ನು ನಡೆಸಿ ಕೊಳ್ಳುವ ರೀತಿ ಶಿಕ್ಷಕರ ಸಾಮಥ್ರ್ಯವನ್ನು ಅಳೆಯುತ್ತದೆ. ಶೈಕ್ಷಣಿಕ ದೂರದೃಷ್ಟಿ ಹೊಂದಿರುವ , ಉತ್ತಮ ವ್ಯವಸ್ಥೆ ಕಲ್ಪಿಸಿದ ದೇಶ ಉತ್ತಮ ಶಿಕ್ಷಣಕ್ಕೆ ಮುನ್ನುಡಿ ಬರೆಯುತ್ತದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಹಲವಾರು ಅಡೆತಡೆಗಳು/ ಅನಾನುಕೂಲಗಳ ಮಧ್ಯೆ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ & ಕೌಶಲವನ್ನು ವೃದ್ಧಿಸಿ ಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಅಣಿಯಾಗುವುದು ಇಂದು ಶಿಕ್ಷಕರಿಗೆ ಸವಾಲಾಗಿದ.

          ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ. ಕಲಿಕೆಯಲ್ಲಿ ತೀವ್ರಗತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಲೇ ಇರುತ್ತದೆ.ತೀವ್ರ ಆರ್ಥಿಕ ಸಂಪನ್ಮೂಲದ ಹೊಳೆಯನ್ನು ಹರಿಸುತ್ತದೆ. ಕರ್ನಾಟಕದಲ್ಲಿ ಇತ್ತೀಚಿಗೆ ಜಾರಿಗೆ ತಂದ ತಂತ್ರಜ್ಞಾನ ಆಧಾರಿತ ತರಬೇತಿಗಳು ಶಿಕ್ಷಕರನ್ನು ಈಗಿನ ವ್ಯವಸ್ಥೆಗೆ ಅಣಿಗೊಳಿಸಿದೆ.

         ಇಂದು ಕೋವಿಡ್-19 ಪ್ರಪಂಚವನ್ನೇ ಆವರಿಸುವುದರಿಂದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು  ಮುನ್ನೆಡಸುವುದು ಸವಾಲಾಗಿ ಪರಿಣಮಿಸಿದೆ.   ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು  ಹೆಚ್ಚಿಸಿ ಕೊಳ್ಳಲಿಕ್ಕೆ ಕೆಳಕಂಡ ವಿಧಾನಗಳನ್ನು ಅನುಸರಿಸ ಬೇಕಾದ ಅನಿವಾರ್ಯತೆಯಿದೆ

      ಪಾಠೋಪಕರಣಗಳ ತಯಾರಿಕೆ:-

         ಶಾಲೆಯಲ್ಲಿ ಶಿಕ್ಷಕರು ಬೋಧನೆಯ ಸಮಯದಲ್ಲಿ ಮಕ್ಕಳಿಗೆ ನೈಜ ಅನುಭವ ಹೊಂದುವ ಒದಗಿಸುವ   ನಿಟ್ಟಿನಲ್ಲಿ ಇಂತಹ ರಜೆಯ ದಿನಗಳಲ್ಲಿ ಬೋಧನೋಪಕರಣಗಳನ್ನು ತಯಾರಿಸಿ ಕೊಳ್ಳಲಿಕ್ಕೆ ಅನುಕೂಲವಾಗಿದೆ.

      ತಂತ್ರಜ್ಞಾನ ಆಧಾರಿತ ಶಿಕ್ಷಣ ಕಲಿಕೆ:-

       ಕಂಪ್ಯೂಟರ್  ಮೂಲಭೂತ ಪರಿಕಲ್ಪನೆಗಳ ಕಲಿಕೆ ಮೂಲಕ ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳಬಹುದು.

      ಯೂಟೂಬ್/ ಆನ್ಲೈನ್ ಶೈಕ್ಷಣಿಕ ಕಾರ್ಯಕ್ರಮಗಳ ವೀಕ್ಷಣೆ:-

           ಯೂಟೂಬ್,ದೀಕ್ಷಾ, ಲರ್ನಿರ್, ಮೇಘ ಯ್ಯಾಪ್ ಮೂಲಕ ಆನ್ಲೈನ್‍ನಲ್ಲಿ ಲಭ್ಯವಿರುವ ಹಲವಾರು   ವಿಷಯಗಳಿಗೆ  ಸಂಬಂಧಿಸಿದ ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು

  ಉದಾ:- ಪ್ರಯೋಗಗಳು, ಆಕಾಶಕಾಯಗಳ ವೀಕ್ಷಣೆ, ಭೂಮಿ ರಚನೆ,

      ಆಕರ ಗ್ರಂಥಗಳನ್ನು ಓದುವುದು:-

       ನಾವು ಬೋಧಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಆಕರ ಗ್ರಂಥಗಳನ್ನು ಗ್ರಂಥಾಲಯಗಳಿಂದ ತಂದು ಓದಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು.

  ಉದಾ:-ಪದವಿಯ ಹಲವಾರು ಆಧಾರ ಗ್ರಂಥಗಳು.

      ಆನ್ಲೈನ್ ತರಬೇತಿ:-

 ಇಲಾಖೆಯ ವತಿಯಿಂದ ನಡೆಯುವ ವೆಬ್ ನಾರ್ ತರಬೇತಿಗಳಲ್ಲಿ ಭಾಗವಹಿಸುವುದು.

 ಉದಾ:- ಮೈಕ್ರೋಸಾಪ್ಟ್ ಟೀಮ್, ಜೂಮ್, ಗೂಗಲ್ ಮೀಟ್

       ಸಾಧಕರೊಂದಿಗೆ ಸಂವಾದ:-

     ಜಿಲ್ಲಾ,ರಾಜ್ಯ, ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸಂಪರ್ಕಿಸಿ ಅವರು ತಮ್ಮ ಬೋಧನೆಯಲ್ಲಿ  ಆಳವಡಿಸಿ ಕೊಂಡ ಉತ್ತಮ ಅಂಶಗಳನ್ನು  ನಮ್ಮ ಬೋಧನೆಯಲ್ಲಿ ಆಳವಡಿಸಿ ಕೊಂಡು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು.

       ಮಕ್ಕಳೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು:-

     ವಿದ್ಯಾರ್ಥಿಗಳೊಂದಿಗೆ ಪೋನ್. ವಾಟ್ಸ್ ಯ್ಯಾಪ್ ಮೂಲಕ  ನಿರಂತರ ಸಂವಾದ ಮಾಡುವುದರ ಮೂಲಕ ಅವರ ಕಲಿಕಾ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು.

      ವೃತ್ತ ಪತ್ರಿಕೆಗಳ ಅಧ್ಯಯನ:-

  ನಾವು ದಿನಾಲೂ ಬರುವ ವೃತ್ತ ಪತ್ರಿಕೆಗಳನ್ನು ಓದುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಳ್ಳ ಬಹುದು.

  ದೂರದರ್ಶನ ವೀಕ್ಷಣೆ:-

     ದೂರದರ್ಶನದಲ್ಲಿ ಪ್ರಸಾರವಾಗುವ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ವೃತ್ತಿ       ನೈಪುಣ್ಯತೆಯನ್ನು  ಹೆಚ್ಚಿಸಿ ಕೊಳ್ಳಲಿಕ್ಕೆ ಸಹಾಯಕವಾಗಿದೆ.

ಉದಾ:- ಚಂದನ ಟಿ.ವಿ.ಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮ, ಸೇತುಬಂಧ      ಕಾರ್ಯಕ್ರಮ, ಮಕ್ಕಳ ವಾಣಿಡಿ.ಎಸ್,.ಆರ್.ಟಿ. ಜ್ಞಾನ ದೀಪ ಕಾರ್ಯಕ್ರಮ

      ಹೀಗೆ ಹತ್ತು ಹಲವು ಚಟುವಟಿಕೆಗಳನ್ನು  ಶಿಕ್ಷಕರು ಅನುಸರಿಸುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸಕ್ರಿಯರಾಗಿ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿ ಕೊಳ್ಳುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿ ಕೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಒಂದು ಉತ್ತಮ  ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರ್ಯಕರ್ತರಾಗೋಣ.